ಗಂಗಾ ಪರಮೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆರೆಮಲು ಬದ್ರಿ ನಿರ್ಮಾಣದ, ವೀರೇಶ ದೊಡ್ಡಬಳ್ಳಾಪುರ ಕಥೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರು ‘ಮಾಯದಂಥ ಮಳೆ’. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಪಟ್ರೆ ಅಜಿತ್ ಮತ್ತು ಭಾವನಾ ರಾವ್ ನಾಯಕ-ನಾಯಕಿಯಾಗಿರುವ ಈ ಚಿತ್ರದಲ್ಲಿ ಚೇತನ್, ದಿವ್ಯ, ಶರತ್ ಬಾಬು, ಶೃತಿ, ಸಿಹಿಕಹಿ ಚಂದ್ರು, ರಮೇಶ್ ಭಟ್, ವೀಣಾ ಸುಂದರ್, ಪದ್ಮಜಾ ರಾವ್, ಬಿರಾದಾರ್, ಎಂ.ಎಸ್. ಉಮೇಶ್, ಮಾಲೂರು ಶ್ರೀನಿವಾಸ್, ದೇವಸಂಪತ್ ಸೇರಿದಂತೆ ಬೃಹತ್ ತಾರಾಬಳಗವೆ ಈ ಚಿತ್ರದಲ್ಲಿದೆ. ಕೆ. ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಮಂಜುನಾಥ್ ರಾವ್ ಅವರ ಗೀತರಚನೆ ಇರುವ ‘ಮಾಯದಂಥ ಮಳೆ’ ಚಿತ್ರಕ್ಕೆ ಹೊನ್ನಾವರ, ಅಪ್ಸರಕೊಂಡ, ವನಕೆ ಫಾಲ್ಸ್, ಮುರಡೇಶ್ವರ, ಕಾರವಾರ, ನಂದಿ ಬೆಟ್ಟ ಮುಂತಾದ ತಾಣಗಳಲ್ಲಿ ಹೊರಾಂಗಣ ಚಿತ್ರೀಕರಣ ನಡೆಸಲಾಗಿದೆ. ಅದ್ಭುತವೆನಿಸುವ ಪ್ರಕೃತಿಯ ನಡುವೆ ಹೆಚ್ಚು ಚಿತ್ರೀಕರಣಗೊಂಡಿರುವುದು ಮತ್ತು ಅನುಭವೀ ನಟರ ದಂಡು ಈ ಚಿತ್ರದಲ್ಲಿರುವುದರಿಂದ ‘ಮಾಯದಂಥ ಮಳೆ’ ಮೋಹಕವಾಗಿ ಮೂಡಿಬಂದೆ ಅನ್ನೋದು ಚಿತ್ರತಂಡದ ಅಭಿಪ್ರಾಯ.